ಈ ವರ್ಷದ ಬೇಸಿಗೆ ಕಾಲ, ಮಳೆಗಾಲದ ಅವಧಿಯಲ್ಲಿ ಭಾರತದ ಅನೇಕ ಪ್ರದೇಶಗಳು ಬರಗಾಲ ಮತ್ತು ಪ್ರವಾಹಗಳಿಂದ ತತ್ತರಿಸಿದವು. ನೀರಾವರಿಗಾಗಿ ಮಳೆಯ ಮೇಲೆ ಅವಲಂಬಿತವಾಗಿರುವ ದೇಶದಲ್ಲಿ (ವ್ಯತಿರಿಕ್ತ) ವಿನಾಶಕಾರಿ ಹವಾಮಾನದಿಂದಾಗಿ ಉಂಟಾಗುವ ಬೆಳೆಗಳ ನಷ್ಟವು ರೈತರಿಗೆ ತೊಂದರೆ ಉಂಟು ಮಾಡಿದೆ. ದೇಶದಲ್ಲಿ ವ್ಯವಸಾಯ ಯೋಗ್ಯ ಭೂಮಿಯ ಅರ್ಧದಷ್ಟು ಭಾಗ ಮಳೆಯ ಮೇಲೆ ಆಶ್ರಯಿಸಿರುವುದರಿಂದ, ಬೆಳೆಗಳು ಹವಾಮಾನದ ವೈಪರೀತ್ಯಗಳನ್ನು (ಅಸ್ಥಿರತೆಗಳನ್ನು) ಸಹಿಸಿಕೊಳ್ಳುವ ವಿಧಾನಗಳು ಅಗತ್ಯವಾಗಿದೆ.
General
ಪರ್ವತಾರೋಹಿಗಳ ಅಚ್ಚುಮೆಚ್ಚಿನ ಹಿಮಾಲಯದ ಹೂವುಗಳು, ಉತ್ಸಾಹಿ ಪರ್ವತಾರೋಹಿಗಳಿಂದ ಭಾರ ಹೊರುವ ಬಗ್ಗೆ ಪಾಠ ಕಲಿತಿರಬಹುದು! ಪರ್ವತಾರೋಹಿಗಳು ಎತ್ತರಕ್ಕೆ ಹೋದಾಗ, ಅಗತ್ಯವಾದ ವಸ್ತುಗಳನ್ನು ಮಾತ್ರ ಒಯ್ಯುತ್ತಾರೆ, ಮತ್ತು ಅಗತ್ಯವಿಲ್ಲದ, ಹೆಚ್ಚುವರಿ ಸಾಮಾನುಗಳನ್ನು ತೆಗೆದುಕೊಂಡು ಹೋಗುವುದಿಲ್ಲ. ಅಂತೆಯೇ, ಇಲ್ಲಿರುವ ಹೂವುಗಳು, ಪ್ರದೇಶ ಎತ್ತರವಾದಷ್ಟು, ಅವುಗಳು ಗಾತ್ರದಲ್ಲಿ ಚಿಕ್ಕದಾಗುತ್ತವೆ, ಮತ್ತು ಅವುಗಳ ಸಣ್ಣ ಪರಾಗಸ್ಪರ್ಶಕಗಳಿಗೆ ತಕ್ಕಂತೆ ಕಡಿಮೆ ಮತ್ತು ಕೇಂದ್ರೀಕೃತವಾದ ಮಕರಂದವನ್ನು ಹಿಡಿದಿಟ್ಟುಕೊಳ್ಳುತ್ತವೆ. ಒಂದು ಬಗೆಯ ಹೂಬಿಡುವ, ಮರದಂತೆ ಇರುವ ಗಿಡಗಳಾದ ರೋಡೋಡೆಂಡ್ರಾನ್ ಗಳ ಕುರಿತು ಇತ್ತೀಚಿನ ಒಂದು ಅಧ್ಯಯನವು ಇದರ ಮೇಲೆ ಬೆಳಕು ಚೆಲ್ಲುತ್ತದೆ.
ಸುಮಾರು ಮೂರು ದಶಕಗಳ ಹಿಂದೆ, ಜರ್ಮನಿಯ ಜೇನುನೊಣ ತಜ್ಞ ಕ್ಲಾಸ್ ವಾರ್ನ್ಕೆ ಅವರು ಭಾರತದ ಲಡಾಖ್ ನ ಸುಂದರವಾದ ಭೂದೃಶ್ಯದಿಂದ ಹೊಸ ಜಾತಿಯ ಕೋಗಿಲೆ-ಜೇನುನೊಣವನ್ನು ಪತ್ತೆ ಮಾಡಿ, ವರದಿ ಮಾಡಿದ್ದರು. ಅವರು ಎಪಿಯೋಲಸ್ ಕುಲಕ್ಕೆ ಸೇರಿದ ಈ ಸಣ್ಣ ಜೇನುನೊಣದ ರೂಪವಿಜ್ಞಾನವನ್ನು ಅಧ್ಯಯನ ಮಾಡಿ, ಅದಕ್ಕೆ ಲಡಾಖ್ ಅನುಗುಣವಾಗಿ, ಎಪಿಯೋಲಸ್ ಲಡಾಖೆನ್ಸಿಸ್ ಎಂದು ನಾಮಕರಣ ಮಾಡಿದರು. ದುರದೃಷ್ಟವಶಾತ್, 1993 ರಲ್ಲಿ ಅವರ ನಿಧನದ ನಂತರ, ಈ ಪ್ರಭೇದದ ಬಗೆಗಿನ ವಿವರಣೆಗಳು ಪ್ರಕಟವಾಗಲಿಲ್ಲ.
ಅಂಜೂರ ಮರದ ವಿತರಣೆಯು ಕಣಜಗಳ ಪ್ರಸರಣ ವಿಕಾಸದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಸಂಶೋಧಕರು ಅಧ್ಯಯನ ಮಾಡಿದ್ದಾರೆ
ಶಾಲೆಯಲ್ಲಿ ಕಲಿಯಬೇಕಾದರೆ ಗಣಿತದ ತರಗತಿ ನೆನಪಿದೆಯೇ? ಗಣಿತ ನಮ್ಮಲ್ಲಿ ಬಹುಪಾಲು ಜನರಿಗೆ ಕಬ್ಬಿಣದ ಕಡಲೆಯಾಗಿತ್ತಲ್ಲವೇ? ಅರ್ಧಕ್ಕಿಂತ ಸೂತ್ರಗಳನ್ನು ಸುಮ್ಮನೆ ಬಾಯಿಪಾಠ ಮಾಡಿ ಪರಿಕ್ಷೆಯಲ್ಲಿ ಬರೆಯುತ್ತಿದ್ದುದು ನೆನಪಿದೆಯೇ? ಇಂತಹ ತಲೆನೋವಿನ ಸೂತ್ರಗಳಲ್ಲಿ ಗೋಳದ ಮೇಲ್ಮೈ ವಿಸ್ತೀರ್ಣದ ಸೂತ್ರವೂ ಸಹ ನಾವು ಬಾಯಿಪಾಠ ಮಾಡಿ ಬರೆದ ಸೂತ್ರಗಳಲ್ಲಿ ಒಂದು. ಆ ಅದ್ಭುತವಾದ ಸೂತ್ರಕ್ಕೆ ನಾವು ಹೇಗೆ ಬಂದಿದ್ದೇವೆ ಎಂಬುದರ ಬಗ್ಗೆ ಯಾವುದೇ ತಿಳುವಳಿಕೆಯಿಲ್ಲದೆ ನಾವು ಅದನ್ನು ವಿವಿಧ ಸಂದರ್ಭಗಳಲ್ಲಿ ಬಳಸಿದ್ದೇವೆ.
“ಬ್ಲಾಕ್ ಗೋಲ್ಡ್” ಅಥವಾ ಕಪ್ಪು ಚಿನ್ನವೆಂದೇ ಕರೆಯಲಾಗುವ ಮೆಣಸು, ಆರ್ಥಿಕವಾಗಿ ಬಹಳಷ್ಟು ಪ್ರಾಮುಖ್ಯತೆ ಹೊಂದಿರುತ್ತದೆ. ಅಲ್ಲದೇ, ಇದರ ಬಗ್ಗೆ ಸಂಶೋಧನೆ ನಡೆಸಲು ಸಂಶೋಧಕರಿಗೆ ಇದು ಒಂದು ಒಳ್ಳೆಯ ವಿಷಯ. ಈ ಮೆಣಸಿನ ಭೌಗೋಳಿಕ ಮೂಲವನ್ನು ಪತ್ತೆ ಮಾಡಲು ಸಂಶೋಧಕರು ತೀವ್ರವಾಗಿ ಅಧ್ಯಯನ ನಡೆಸುತ್ತಿದ್ದಾರೆ. ಭಾರತ ಹಾಗೂ ಗೋಂಡ್ವಾನ ಭೂರಾಶಿಗೆ ಐತಿಹಾಸಿಕ ಸಂಬಂಧವಿದೆಯೆಂದು ಈ ಭಾಗಗಳಿನ ಜೀವವೈವಿಧ್ಯತೆ, ಮುಖ್ಯವಾಗಿ ಪ್ರಭೇದಗಳಲ್ಲಿ ಇರುವ ಹೋಲಿಕೆಯೇ ಈ ಸಂಶೋಧನೆಗೆ ಮುಖ್ಯ ಕಾರಣ. ಅದರಲ್ಲೂ “ಪೈಪರ್” ಅಥವಾ “ಪೆಪ್ಪರ್” ಪ್ರಭೇದಗಳು ೬೬-೧೦೦.೫ ದಶಲಕ್ಷ ವರ್ಷಗಳ ಹಿಂದೆ ಈ ಎರಡೂ ಭೂರಾಶಿಗಳಲ್ಲಿ ಬೇರೂರಿವೆಯೆಂದು ಹೇಳಲಾಗಿದೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರ ಒಂದು ತಂಡ ಪಶ್ಚಿಮ ಘಟ್ಟಗಳ ಹಾವುಗಳನ್ನು ಕ್ರಮಬದ್ಧವಾಗಿ ಅಧ್ಯಯನ ನಡೆಸಲು ಪ್ರಯತ್ನಿಸುತ್ತಿದ್ದರು. ಈ ಕ್ರಮಬದ್ಧ ಅಧ್ಯಯನ ನಡೆಸುವಾಗ ಪಶ್ಚಿಮ ಘಟ್ಟಗಳ ಕಾಡುಗಳಿಗೆ ಸ್ವಂತವಾದ “ಪ್ರೊಹೇಟುಲ್ಲಾ ಆಂಟಿಕಾ” ಎನ್ನುವ ಒಂದು ಬಳ್ಳಿಹಾವನ್ನು ಅಕಸ್ಮಾತಾಗಿ ಕಂಡರು. ಇದು ಒಂದು ಪುರಾತನ ಪ್ರಭೇದವೆಂದು, ಸುಮಾರು ೨೬ ಮಿಲಿಯನ್ ವರುಷಗಳ ಹಿಂದೆ, ಮಧ್ಯ ಒಲಿಗೋಸೀನ್ ಯುಗದಲ್ಲಿ ವಿಕಾಸನಗೊಂಡಿತೆಂದು ಅಂದಾಜಿಸಲಾಗಿದೆ.
ಭಾರತ - ಜಗತ್ತಿನ ಅತೀ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯೆಗಳಲ್ಲಿ ಅಗ್ರ ರಾಷ್ಟ್ರ. ಜೊತೆಗೆ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಎರಡನೇ ರಾಷ್ಟ್ರ. ಆದರೆ ದುರದೃಷ್ಟದ ಸಂಗತಿಯೇನು ಗೊತ್ತೆ? ಭಾರತದ ಸುಮಾರು 15% ಜನ ಇಂದಿಗೂ ಕತ್ತಲೆಯಲ್ಲೆ ಜೀವನ ನಡೆಸುತ್ತಿದ್ದಾರೆ. ಇದಕ್ಕೆಲ್ಲ ಕಾರಣ ಕೇವಲ ಸರ್ಕಾರ ಎಂದರೆ ತಪ್ಪಾಗಬಹುದು. ಭಾರತದ ವಿದ್ಯುತ್ ಪೂರೈಕೆಗೆ ಒಂದೆಡೆ ಅರ್ಥಿಕ ಹಾಗೂ ನೈಸರ್ಗಿಕ ಸಂಪನ್ಮೂಲದ ಕೊರತೆ ಇದ್ದರೆ, ಇನ್ನೊಂದೆಡೆ ಪರಿಸರ ರಕ್ಷಣೆಯ ದೊಡ್ಡ ಜವಾಬ್ದಾರಿಯೂ ತಡೆಯಾಗಿ ನಿಂತಿದೆ. ವಿಶ್ವದ ಅನೇಕ ದೇಶಗಳು ಈಗಾಗಲೆ ನವೀಕರಿಸಬಹುದಾದ ಇಂಧನಗಳ ಸಂಪೂರ್ಣ ಉಪಯೋಗವನ್ನು ಪಡೆದುಕೊಳ್ಳತೊಡಗಿವೆ.
ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ಕಪ್ಪೆಗಳ ಸಾಮ್ರಾಜ್ಯ ಗೋಚರಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಮಳೆಗಾಲದಲ್ಲಿ ಎಷ್ಟೋ ಕಪ್ಪೆಗಳು ತಮ್ಮ ಸಂತಾನೋತ್ಪತ್ತಿ ಪ್ರಕ್ರಿಯೆಯತ್ತ ಮುಖ ಮಾಡುತ್ತವೆ. ಆದರೆ, ಇತ್ತೀಚೆಗಷ್ಟೇ, ಈಶಾನ್ಯ ಭಾರತದ, ಅಸ್ಸಾಂ ರಾಜ್ಯದ ಕಾಡುಗಳಲ್ಲಿ ಪತ್ತೆಯಾದ ಕಪ್ಪೆಯ ಹೊಸ ಪ್ರಭೇದವಾದ “ಮಿಕ್ರಿಲೆಟ್ಟ ಐಶಾನಿ” ಮುಂಗಾರು ಪ್ರಾರಂಭವಾಗುವ ಮುನ್ನವೇ ತನ್ನ ಸಂತಾನೋತ್ಪತ್ತಿ ಪ್ರಕ್ರಿಯೆಯನ್ನು ಪ್ರಾರಂಭಿಸಿ, ನಂತರ ಮುಂದಿನ ಮಳೆಗಾಲದವರೆಗೆ ಕಾಣಿಸಿಕೊಳ್ಳುವುದಿಲ್ಲ!