ಅಂಜೂರ ಮರದ ವಿತರಣೆಯು ಕಣಜಗಳ ಪ್ರಸರಣ ವಿಕಾಸದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಸಂಶೋಧಕರು ಅಧ್ಯಯನ ಮಾಡಿದ್ದಾರೆ
Ecology
“ಬ್ಲಾಕ್ ಗೋಲ್ಡ್” ಅಥವಾ ಕಪ್ಪು ಚಿನ್ನವೆಂದೇ ಕರೆಯಲಾಗುವ ಮೆಣಸು, ಆರ್ಥಿಕವಾಗಿ ಬಹಳಷ್ಟು ಪ್ರಾಮುಖ್ಯತೆ ಹೊಂದಿರುತ್ತದೆ. ಅಲ್ಲದೇ, ಇದರ ಬಗ್ಗೆ ಸಂಶೋಧನೆ ನಡೆಸಲು ಸಂಶೋಧಕರಿಗೆ ಇದು ಒಂದು ಒಳ್ಳೆಯ ವಿಷಯ. ಈ ಮೆಣಸಿನ ಭೌಗೋಳಿಕ ಮೂಲವನ್ನು ಪತ್ತೆ ಮಾಡಲು ಸಂಶೋಧಕರು ತೀವ್ರವಾಗಿ ಅಧ್ಯಯನ ನಡೆಸುತ್ತಿದ್ದಾರೆ. ಭಾರತ ಹಾಗೂ ಗೋಂಡ್ವಾನ ಭೂರಾಶಿಗೆ ಐತಿಹಾಸಿಕ ಸಂಬಂಧವಿದೆಯೆಂದು ಈ ಭಾಗಗಳಿನ ಜೀವವೈವಿಧ್ಯತೆ, ಮುಖ್ಯವಾಗಿ ಪ್ರಭೇದಗಳಲ್ಲಿ ಇರುವ ಹೋಲಿಕೆಯೇ ಈ ಸಂಶೋಧನೆಗೆ ಮುಖ್ಯ ಕಾರಣ. ಅದರಲ್ಲೂ “ಪೈಪರ್” ಅಥವಾ “ಪೆಪ್ಪರ್” ಪ್ರಭೇದಗಳು ೬೬-೧೦೦.೫ ದಶಲಕ್ಷ ವರ್ಷಗಳ ಹಿಂದೆ ಈ ಎರಡೂ ಭೂರಾಶಿಗಳಲ್ಲಿ ಬೇರೂರಿವೆಯೆಂದು ಹೇಳಲಾಗಿದೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರ ಒಂದು ತಂಡ ಪಶ್ಚಿಮ ಘಟ್ಟಗಳ ಹಾವುಗಳನ್ನು ಕ್ರಮಬದ್ಧವಾಗಿ ಅಧ್ಯಯನ ನಡೆಸಲು ಪ್ರಯತ್ನಿಸುತ್ತಿದ್ದರು. ಈ ಕ್ರಮಬದ್ಧ ಅಧ್ಯಯನ ನಡೆಸುವಾಗ ಪಶ್ಚಿಮ ಘಟ್ಟಗಳ ಕಾಡುಗಳಿಗೆ ಸ್ವಂತವಾದ “ಪ್ರೊಹೇಟುಲ್ಲಾ ಆಂಟಿಕಾ” ಎನ್ನುವ ಒಂದು ಬಳ್ಳಿಹಾವನ್ನು ಅಕಸ್ಮಾತಾಗಿ ಕಂಡರು. ಇದು ಒಂದು ಪುರಾತನ ಪ್ರಭೇದವೆಂದು, ಸುಮಾರು ೨೬ ಮಿಲಿಯನ್ ವರುಷಗಳ ಹಿಂದೆ, ಮಧ್ಯ ಒಲಿಗೋಸೀನ್ ಯುಗದಲ್ಲಿ ವಿಕಾಸನಗೊಂಡಿತೆಂದು ಅಂದಾಜಿಸಲಾಗಿದೆ.
ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ಕಪ್ಪೆಗಳ ಸಾಮ್ರಾಜ್ಯ ಗೋಚರಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಮಳೆಗಾಲದಲ್ಲಿ ಎಷ್ಟೋ ಕಪ್ಪೆಗಳು ತಮ್ಮ ಸಂತಾನೋತ್ಪತ್ತಿ ಪ್ರಕ್ರಿಯೆಯತ್ತ ಮುಖ ಮಾಡುತ್ತವೆ. ಆದರೆ, ಇತ್ತೀಚೆಗಷ್ಟೇ, ಈಶಾನ್ಯ ಭಾರತದ, ಅಸ್ಸಾಂ ರಾಜ್ಯದ ಕಾಡುಗಳಲ್ಲಿ ಪತ್ತೆಯಾದ ಕಪ್ಪೆಯ ಹೊಸ ಪ್ರಭೇದವಾದ “ಮಿಕ್ರಿಲೆಟ್ಟ ಐಶಾನಿ” ಮುಂಗಾರು ಪ್ರಾರಂಭವಾಗುವ ಮುನ್ನವೇ ತನ್ನ ಸಂತಾನೋತ್ಪತ್ತಿ ಪ್ರಕ್ರಿಯೆಯನ್ನು ಪ್ರಾರಂಭಿಸಿ, ನಂತರ ಮುಂದಿನ ಮಳೆಗಾಲದವರೆಗೆ ಕಾಣಿಸಿಕೊಳ್ಳುವುದಿಲ್ಲ!
2015ರಲ್ಲಿ, ಅದೊಂದು ಮಾಮೂಲು ಸುದಿನ. ಪುಣೆಯ ಅಘರ್ಕರ್ ಸಂಶೋಧನಾ ಕೇಂದ್ರದ, ವಿಜ್ಞಾನಿಯಾದ ಡಾ. ರಿತೇಶ್ ಕುಮಾರ್ ಚೌಧರಿಯನ್ನು ಕಾಣಲು ಬಂದಿದ್ದ, ಬೆಂಗಳೂರಿನ ಎಂ. ಈ. ಎಸ್. ವಿಜ್ಞಾನ, ವಾಣಿಜ್ಯ ಹಾಗೂ ಕಲಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ. ಜಿ. ರಾಮಚಂದ್ರ ರಾವ್, ಉತ್ತರ ಕನ್ನಡ ಜಿಲ್ಲೆಯಿಂದ, ಚಿಕ್ಕ ಹೂಗಳಿರುವ, ಹುಲ್ಲಿನಂತೆ ಕಾಣುವ ಕೆಲ ಗಿಡಗಳ ಮಾದರಿಗಳನ್ನು ತಂದು, ಅದನ್ನು ಗುರುತಿಸಲು ಡಾ. ಚೌಧರಿಯ ಸಹಾಯ ಕೋರಿದರು. ಡಾ. ಚೌಧರಿಯವರು ಅದನ್ನು ಕೂಡಲೇ ಒಂದು ‘ಪೈಪ್ವರ್ಟ್’ ಅಥವಾ ಹೂಬಿಡುವ ಏಕದಳದ ಒಂದು ಪ್ರಭೇದ ಎಂದು ಗುರುತಿಸಿದರು. ಆದರೆ, ಇದು ಯಾವ ಪ್ರಭೇದವೆನ್ನುವುದು ಒಂದು ದೊಡ್ಡ ಯಕ್ಷ ಪ್ರಶ್ನೆಯಾಗಿತ್ತು!
ಇತ್ತೀಚಿನ ಅಧ್ಯಯನವೊಂದರ ಭಾಗವಾಗಿ, ಕೇರಳದ ಪಶ್ಚಿಮ ಘಟ್ಟಗಳಲ್ಲಿ ಮತ್ತೊಂದು ಹೊಸ ಪ್ರಭೇದದ ಕಪ್ಪೆಯನ್ನು ಸಂಶೋಧಕರು ಪತ್ತೆಹಚ್ಚಿದ್ದಾರೆ. ‘ಮೈಕ್ರೊಹೈಲಾ ಡಾರ್ರೆಲಿ’ ಎಂಬ ಹೆಸರಿನ ಈ ಕಪ್ಪೆ, ‘ಮೈಕ್ರೊಹೈಲಾ’ ಕುಲಕ್ಕೆ ಸೇರಿದ ಜೀವಿಯಾಗಿದೆ; ಈ ಕುಲದ ಕಪ್ಪೆಗಳಿಗೆ ‘ಕಿರಿ ಮೂತಿಯ ಕಪ್ಪೆ’ (ನ್ಯಾರೋ ಮೌಥ್ಡ್ ಫ್ರಾಗ್) ಎಂಬ ಸಾಮಾನ್ಯ ಹೆಸರಿದ್ದು, ಇದಕ್ಕೆ ಕಾರಣ ಅವುಗಳ ತ್ರಿಕೋನಾಕಾರದ ಪುಟ್ಟ ದೇಹ ಮತ್ತು ಕಿರಿದಾದ ಮೂತಿ. ಈ ಕುಲದ ಕಪ್ಪೆಗಳು ಜಪಾನ್, ಚೀನಾ, ಭಾರತ, ಶ್ರೀಲಂಕಾ ಮತ್ತು ಆಗ್ನೇಯ ಏಷ್ಯಾದಲ್ಲಿ ಹೆಚ್ಚಾಗಿ ಕಂಡುಬರುತ್ತವೆ.
ಇತ್ತೀಚಿನ ಅಧ್ಯಯನವೊಂದರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರು, ನಗರೀಕರಣವು ಹೇಗೆ ಓತಿಕೇತಗಳ ಸಾಮಾಜಿಕ ನಡವಳಿಕೆ ಮತ್ತು ಕಾರ್ಯತಂತ್ರಗಳನ್ನುರೂಪಿಸುತ್ತದೆ ಎಂದು ವಿವರಿಸಿದ್ದಾರೆ. ಸಂಶೋಧಕರು ತಮ್ಮ ಅಧ್ಯಯನವನ್ನು ದಕ್ಷಿಣ ಭಾರತದ ಗುಡ್ಡಗಾಡು ಪ್ರದೇಶಗಳಲ್ಲಿ ಸರ್ವೇಸಾಮಾನ್ಯವಾಗಿ ವಾಸಿಸುವ ದಕ್ಷಿಣ ಭಾರತದ ಒಂದು ಬಗೆಯ ಓತಿಕೇತ, ರಾಕ್ ಅಗಾಮಗಳ (ಸಾಮ್ಮೊಫಿಲಸ್ ಡೋರ್ಸಲಿಸ್) ಮೇಲೆ ಕೈಗೊಂಡಿದ್ದಾರೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಗಂಡು ಓತಿಕೇತಗಳು ಇತರೇ ಗಂಡು ಮತ್ತು ಹೆಣ್ಣು ಓತಿಕೇತಗಳೊಂದಿಗೆ ಪರಸ್ಪರ ಹೇಗೆ ವರ್ತಿಸುತ್ತವೆ ಎಂಬುದನ್ನು ಅವರು ಅಧ್ಯಯನ ಮಾಡಿದ್ದಾರೆ.
ನಾವು ಯಾರನ್ನಾದರೂ “ಹೆಚ್ಚು ಅರಣ್ಯಗಳನ್ನು ಬೆಳೆಸಬೇಕೆ” ಎಂದು ಕೇಳಿದರೆ, ಸಾಮಾನ್ಯವಾಗಿ "ಖಂಡಿತವಾಗಲೂ ಬೆಳೆಸಬೇಕು; ಅರಣ್ಯಗಳು ಜಾಗತಿಕ ತಾಪಮಾನ ಏರಿಕೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ" ಎಂದೋ, "ಕಾಡು ಸಾವಿರಾರು ಜೀವಿಗಳ ಆವಾಸಸ್ಥಾನ" ಎಂದೋ ಉತ್ತರ ಕೇಳಿಬರುತ್ತದೆ. ಆದರೆ, ಈಗಿರುವ ಒಂದು ಬಗೆಯ ಭೂದೃಶ್ಯವನ್ನು ಕೃತಕವಾಗಿ ಕಾಡನ್ನಾಗಿ ಬದಲಾಯಿಸುವುದು ಎಲ್ಲಾ ಸಂದರ್ಭಗಳಲ್ಲಿ ಅತ್ಯುತ್ತಮ ಆಯ್ಕೆಯಲ್ಲ ಎಂಬುದು ನಿಮಗೆ ತಿಳಿದಿದೆಯೇ? ಹೌದು, ಕಾಡು ಬೆಳೆಸುವುದೆಂದರೆ ಒಳ್ಳೆಯದೇ ಎಂಬ ನಮ್ಮ ದೃಢವಾದ ನಂಬಿಕೆಗೆ ವ್ಯತಿರಿಕ್ತವಾಗಿ, ಕೃತಕವಾಗಿ ಕಾಡುಗಳನ್ನು ಬೆಳೆಸುವುದು ಕೆಲವೊಮ್ಮೆ ಒಳ್ಳೆಯದಕ್ಕಿಂತ ಹೆಚ್ಚಿನ ಹಾನಿಯನ್ನೇ ಮಾಡುತ್ತದೆ.
ಪಶ್ಚಿಮ ಘಟ್ಟಗಳು ಜೀವ ವೈವಿಧ್ಯದಿಂದ ಸಮೃದ್ಧವಾಗಿರುವ ಪರಿಸರ ವ್ಯವಸ್ಥೆ; ಅದಕ್ಕೆ ಇದನ್ನು 'ಜೀವವೈವಿಧ್ಯತೆಯ ಹಾಟ್ಸ್ಪಾಟ್' ಎಂದು ವಿಜ್ಞಾನಿಗಳು ಘೋಷಿಸುತ್ತಾರೆ. ಆದರೆ ಈ ಘೋಷಣೆಯನ್ನು ಬೆಂಬಲಿಸಲು ಪುರಾವೆ ಹೇಗೆ ಸಿಗುತ್ತದೆ ಗೊತ್ತೇ? ಅದಕ್ಕೆ ಯಾವುದೇ ಒಂದು ಪರಿಸರ ವ್ಯವಸ್ಥೆಯಲ್ಲಿ ದೊರೆಯುವ ಮಾದರಿಗಳ ಸಂಗ್ರಹಣೆ ಮತ್ತು ವಿಶ್ಲೇಷಣೆಯ ಮೂಲಕ, ಜೀವವೈವಿಧ್ಯದ ಸಮೃದ್ಧಿಗೆ ಸಾಕ್ಷಿ ಒದಗಿಸುತ್ತಾರೆ.