ಐಐಟಿ ಬಾಂಬೆ ಯ ಬ್ಯಾಟರಿ ಪ್ರೋಟೋಟೈಪಿಂಗ್ ಲ್ಯಾಬ್ ನ ಸಂಶೋಧಕರು ಇಂಧನ (ಶಕ್ತಿ) ಶೇಖರಣಾ ಸಾಧನವಾಗಿರುವ ರೀಚಾರ್ಜ್ ಮಾಡಬಹುದಾದ ಬ್ಯಾಟರಿಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ.
Science
ಉಷ್ಣವಲಯದ ಸವನ್ನಾಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಅಲ್ಲಿ ತಂಪೆನಿಸುವ ಎತ್ತರದ ಮರಗಳಿಲ್ಲದೇ ಇರಬಹುದು, ಆದರೆ ಎಲ್ಲಿನೋಡಿದರೂ ಹಸಿರು ಹುಲ್ಲು, ವಿವಿಧ ಚಿಟ್ಟೆಗಳೂ, ಕೀಟಗಳೂ, ಅವುಗಳನ್ನು ಹಿಡಿಯಲು ಅಡಗಿ ಕುಳಿತ ಹಕ್ಕಿಗಳೂ, ಹಾವು-ಹಲ್ಲಿ-ಓತಿಕೇತಗಳೂ ಕಾಣಸಿಗುತ್ತವೆ. ವಿಸ್ತಾರವಾದ ಹುಲ್ಲುಗಾವಲುಗಳಿಂದ ತುಂಬಿರುವ ಸವನ್ನಾಗಳನ್ನು, ಸಾಮಾನ್ಯವಾಗಿ ಪಾಳುಭೂಮಿಗಳು ಎಂದು ತಪ್ಪಾಗಿ ವರ್ಗೀಕರಿಸಲಾಗುತ್ತದೆ. ಇತ್ತೀಚಿನ ಅಧ್ಯಯನದ ಪ್ರಕಾರ, ಈ ಉಷ್ಣವಲಯದ ಹುಲ್ಲುಗಾವಲೆಂಬ ಪರಿಸರ ವ್ಯವಸ್ಥೆಗಳು, ಹಲವು ಬಗೆಯಲ್ಲಿ ಅನನ್ಯವೆನಿಸಿದ್ದು, ಭೂಮಿಯ ಮೇಲೆ ಮತ್ತೆಲ್ಲಿಯೂ ಕಂಡುಬರದ ಹಲವಾರು ಸಸ್ಯಗಳಿಗೆ ನೆಲೆಯಾಗಿದೆ.
ಒಂದು ಅದ್ಭುತವಾದ ವರ್ಷದ ಅಂತ್ಯದಲ್ಲಿದ್ದೇವೆ ನಾವು! ೨೦೨೧ ವರ್ಷದಲ್ಲಿ ಸಂಶೋಧನೆ ವಿಷಯದಲ್ಲಿ ಭಾರತದಲ್ಲಿ ನಡೆದ ಘಟನೆಗಳನ್ನು ಮೆಲುಕುಹಾಕುವ ಬನ್ನಿ! ೨೦೨೧ ನೇ ಇಸವಿ ಬಹಳಷ್ಟು ಜನರಿಗೆ ಏರುಪೇರಾಗಿತ್ತು. ಕೋವಿಡ್ -೧೯ ಹರಡುವಿಕೆಯ ಅಲೆ ಶಿಖರದಲ್ಲಿದ್ದರೂ ೨೦೨೦ರಲ್ಲಿ ಕಂಡುಹಿಡಿದ ಲಸಿಕೆಯನ್ನು ಭಾರತದಲ್ಲಿ ೨೦೨೧ ರಲ್ಲಿ ಪರಿಚಯಿಸಿದ್ದು ಒಂದು ಸಾಧನೆ. ಹೀಗೆ ವಿಜ್ಞಾನ, ಇಂಜಿನಿಯರಿಂಗ್, ಗಣಿತ, ಔಷಧಿ ಇನ್ನೂ ಇತರೆ ವಿಷಯಗಳಲ್ಲಿ ಸಂಶೋಧನೆ ಎಲ್ಲೆಮೀರಿದೆ. ನಾವು ಸಂಶೋಧನೆಯ ಹಾದಿಯಲ್ಲಿ ಮಾಡಿದ ಸಾಧನೆಗಳನ್ನು, ಮತ್ತು ಖ್ಯಾತಿಗಳನ್ನು ಒಮ್ಮೆ ಮೆಲುಕು ಹಾಕುವ ಸಮಯ ಇದು!
ಕಪ್ಪೆಗಳಿಗೆ ಔತಣ ಕೂಟವಾದ ಬತ್ತದ ಗದ್ದೆಗಳು
ಗದ್ದೆಯ ಕೀಟಕಗಳನ್ನು ನಿಯಂತ್ರಿಸಲು ಕಪ್ಪೆಗಳಲ್ಲಿದೆ ಅಪರೂಪದ ಪ್ರತಿಭೆ.
ಲ್ಯಾಕ್ಟಿಕ್ ಆಮ್ಲ ವನ್ನು ವೆಚ್ಚ ಪರಿಣಾಮಕಾರಿ ಹಾಗೂ ಪರಿಸರ ಸ್ನೇಹಿಯನ್ನಾಗಿಸಲು ಕ್ಷಾರ ಹಾಗೂ ಕಿಣ್ವಗಳ ಬಳಕೆಯಲ್ಲಿ ಸುಧಾರಣೆಯ ಅಗತ್ಯವಿದೆ.
ನಗರ ಪ್ರದೇಶದ ಅಪೌಷ್ಟಿಕತೆಯ ನಿವಾರಣೆಗೆ ರುಚಿಯಾದ ಹಾಗೂ ವೈವಿಧ್ಯಮಯವಾದ ಪೂರಕ ಆಹಾರ ಪದಾರ್ಥಗಳು ಪರಿಹಾರ ನೀಡಬಹುದು
ಹೆಸರಿಗೆ ತಕ್ಕಂತೆ ಕಾಸ್ಮಿಕ್ ಕಿರಣಗಳು ಅಮೋಘವಾದ ಕಿರಣಗಳು. ದೂರದ ಬ್ರಹ್ಮಾಂಡದಲ್ಲಿನ ವಿಪರೀತ ಘಟನೆಗಳಿಂದ ಉತ್ಪನ್ನವಾಗುವ ಈ ಕಿರಣಗಳು ಭೂಮಿಯನ್ನು ತಲುಪುವ ಮುನ್ನ ಬೆಳಕಿನ ವೇಗದ ಸಮೀಪದ ವೇಗದಲ್ಲಿ ಬಾಹ್ಯಾಕಾಶದೊಳಗೆ ಬಹಳ ದೂರ ಸಂಚರಿಸುತ್ತವೆ. ಇವುಗಳಲ್ಲಿ ಕೆಲವು ಕಿರಣಗಳನ್ನು ಭೂಮಿಯ ವಾಯುಮಂಡಲ ಹೀರಿಕೊಳ್ಳುತ್ತದೆ, ಇನ್ನು ಹಲವು ಕಿರಣಗಳು ಭೂಮಿಯ ಮೇಲ್ಪದರದವರೆಗೆ ಚಲಿಸುತ್ತವೆ. ಈ ಕಾಸ್ಮಿಕ್ ಕಿರಣಗಳೊಳಗೆ ಏನಿದೆ, ಯಾವ ಖಗೋಳ ಘಟನೆಗಳಿಂದ ಇವು ಹುಟ್ಟುತ್ತವೆ, ಇವನ್ನೇಕೆ ನಾವು ಭೂಮಿಯ ಮೇಲೆ ಗಮನಿಸುತ್ತೇವೆ - ಈ ಪ್ರಶ್ನೆಗಳು ಕಾಸ್ಮಿಕ್ ಕಿರಣಗಳು ಆವಿಷ್ಕಾರಗೊಂಡ 1912 ನೇ ಇಸವಿಯಿಂದ ಖಗೋಳ ವಿಜ್ಞಾನಿಗಳನ್ನು ಚಕಿತಗೊಳಿಸಿವೆ.
ಜೂನ್ 2019 ರಲ್ಲಿ ಚೆನ್ನೈನ ಜನತೆ ಒಂದು ಭಯಾನಕ ಸಂಗತಿಯನ್ನು ಎದುರಿಸಬೇಕಾಯಿತು - ನಗರದ ಜಲಾಶಯಗಳ ಅಳವಿನ 0.1 ಪ್ರತಿಶತಕ್ಕೆ ನೀರಿನ ಮಟ್ಟ ಇಳಿದುಹೋಗಿತ್ತು. ಹಾಗೆ ನೋಡಿದರೆ ನೀರಿನ ಲಾರಿಗಳು, ಖಾಲಿ ಬಕೆಟ್ ಗಳು, ಉದ್ರಿಕ್ತ ನಾಗರೀಕರು - ಇವುಗಳನ್ನೊಳಗೊಂಡ ದೃಶ್ಯಗಳು, ಭಾರತದಲ್ಲಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಸರ್ವೇ ಸಾಮಾನ್ಯವಾಗಿದೆ.
2019 ರಲ್ಲಿ, ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಪುಣೆ (ಐಐಎಸ್ಇಆರ್ ಪುಣೆ), ರಾಷ್ಟ್ರೀಯ ಕೋಶ ವಿಜ್ಞಾನ ಕೇಂದ್ರ, ಪುಣೆ (ಎನ್ಸಿಸಿಎಸ್) ಮತ್ತು ಪುಣೆಯ ಪರ್ಸಿಸ್ಟೆಂಟ್ ಸಿಸ್ಟಮ್ಸ್ ಲಿಮಿಟೆಡ್, ಸಂಸ್ಥೆಗಳ ಸಹಯೋಗದೊಂದಿಗೆ ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯು (ಡಿಬಿಟಿ) ಮಹತ್ವಾಕಾಂಕ್ಷೆಯ ಯೋಜನೆಯೊಂದನ್ನು ಪ್ರಾರಂಭಿಸಿದೆ. ಮಾನವ್ - ದಿ ಹ್ಯೂಮನ್ ಅಟ್ಲಾಸ್ ಇನಿಶಿಯೇಟಿವ್ ಎಂದು ಕರೆಯಲ್ಪಡುವ ಇದು, ದೇಶದ ಮೊದಲ ಇಂತಹ ಯೋಜನೆಯಾಗಿದೆ.
ಚಿತ್ರ: ಸಿಂಧುಜಾ ಶೃಂಗೇರಿ