ಕರ್ನಾಟಕದ ದಕ್ಷಿಣದಲ್ಲಿರುವ, ಐತಿಹಾಸಿಕವಾಗಿ ಬಂಟ್ವಾಳ ನದಿ ಎಂದು ಕರೆಯಲ್ಪಡುವ ನೇತ್ರಾವತಿ ನದಿಯ ಪ್ರವಾಹವು, ನೈರುತ್ಯ ಮಾನ್ಸೂನ್ ಸಮಯದಲ್ಲಿ ಕಂಡುಬರುವ ಸಾಮಾನ್ಯ ದೃಶ್ಯವಾಗಿದೆ. ಬಂಟ್ವಾಳ ಪಟ್ಟಣದ ಸ್ಥಳೀಯ ನಿವಾಸಿಗಳು ಇನ್ನೂ 1974 ರಲ್ಲಿ ನದಿಯ ನೀರಿನ ಪ್ರಮಾಣ ಜಾಸ್ತಿಯಾಗಿ ಅದು ಉಕ್ಕಿ ಹರಿದಾಗ ಉಂಟಾದ ವಿನಾಶಕಾರಿ ಪ್ರವಾಹದಿಂದ ಹೊರಬಂದು ಪುನಃ ಬದುಕು ಕಟ್ಟಿಕೊಳ್ಳುತ್ತಿರುವಾಗಲೇ ಮತ್ತೆ ಇದು ಇತ್ತೀಚೆಗೆ 2013 ಮತ್ತು 2015 ರಲ್ಲಿ ಹಾಗೂ 2018 ರಲ್ಲಿ ಪುನರಪ್ಪಳಿಸಿದೆ. ನದಿಯ ನೀರಿನ ಮಟ್ಟದಲ್ಲಿ ಉಂಟಾಗುತ್ತಿರುವ ಎಲ್ಲಾ ಬದಲಾವಣೆಗಳಿಗೆ ಮಳೆ ಸುರಿತದ ಏರಿಳಿತಗಳು ಕಾರಣವೇ?
Society
ಹೊಸ ವರ್ಷ ಬಂದಾಯಿತು, ಆದರೆ ನಾವಿನ್ನು ೨೦೧೮ರ ವರ್ಷಾಗಮನವನ್ನು ಕಳೆದ ವರ್ಷದಲ್ಲಿ ಪ್ರಾರಂಭಿಸಿದ ಕೆಲವು ಚಟುವಟಿಗೆಗಳನ್ನು ಮೆಲಕು ಹಾಕುತ್ತಿದ್ದೇವೆ. ಅವುಗಳಲ್ಲಿ ಪ್ರಮುಖವಾದುದ್ದು ಪ್ರಾದೇಶಿಕ ಭಾಷೆಗಳಲ್ಲಿ ವೈಜ್ಞಾನಿಕ ಲೇಖನಗಳನ್ನು ಹೊರತರುವುದು. ಪ್ರಾರಂಭಿಕವಾಗಿ ನಾವು ಮೊದಲು ಕನ್ನಡದಲ್ಲಿ ಲೇಖನಗಳನ್ನು ಈಗ ಕಳೆದು ಮೂರು-ನಾಲ್ಕು ವರ್ಷಗಳಿಂದ ಬರೆಯುತ್ತಿದ್ದೇವೆ. ಇದಕ್ಕೆ ನಮಗೆ 'ಪ್ರಜಾವಾಣಿ'ಯಿಂದಲೂ ಬಹಳಷ್ಟು ಪ್ರೋತ್ಸಾಹ ದೊರೆಯಿತು. ಪ್ರತಿ ಸೋಮವಾರ, 'ವಿಜ್ಞಾನ ಲೋಕದಿಂದ' ಎಂಬ ಅಂಕಣದಲ್ಲಿ ನಮ್ಮ ಲೇಖನಗಳು ಮುದ್ರಣವಾಗುತ್ತಿತ್ತು. ಕಳೆದ ವರ್ಷ ನಾವು ಹಿಂದಿ, ಮರಾಠಿ ಮತ್ತು ಅಸ್ಸಾಮೀಸ್ ನಲ್ಲೂ ಲೇಖನಗಳನ್ನು ಪ್ರಕಟಿಸಲು ಪ್ರಾರಂಭಿಸಿದೆವು. ಈ ವರ್ಷ ಇನ್ನಷ್ಟು ಪ್ರಾದೇಶಿಕ ಭಾಷೆಗಳಲ್ಲಿ ಬಹಳಷ್ಟು ಲೇಖನಗಳು, ಪಾಡ್ಕ್ಯಾಸ್ಟ್ಗಳು, ಮತ್ತು ಇತರೆ ರೀತಿಯಲ್ಲಿ ಪ್ರಕಟಿಸಬೇಕೆಂದಿದ್ದೇವೆ. ಇಲ್ಲಿ ಕಳೆದ ವರ್ಷ ಪ್ರಾದೇಶಿಕ ಭಾಷೆಯಲ್ಲಿ ಪ್ರಕಟಿಸಿದ ಕೆಲವು ಆಯ್ದ ಲೇಖನಗಳನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇವೆ.
ಈ ವರ್ಷದ ‘ವಿಶ್ವ ಪರಿಸರ ದಿನ’ದ ಅಂಗವಾಗಿ ‘‘ಪ್ಲಾಸ್ಟಿಕ್ಕಿನಿಂದ ಮಾಲಿನ್ಯ ತಡೆಗಟ್ಟೋಣ’’ ಎಂದು ವಿಶ್ವ ಸಂಸ್ಥೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಘೋಷಿಸಿದೆ. ಪ್ಲಾಸ್ಟಿಕ್ ಇಂದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದ್ದರೂ ಅದರ ಬಗ್ಗೆ ಸರಿಯಾದ ಅರಿವು ಅತ್ಯವಶ್ಯಕ.
ಮಧುಮೇಹ, ಅಧಿಕ ರಕ್ತದೊತ್ತಡ, ಪಾರ್ಕಿನ್ಸನ್ ಮುಂತಾದ ಸಾಂಕ್ರಾಮಿಕವಲ್ಲದ ರೋಗಗಳು, ಅಂದರೆ, ಒಬ್ಬ ವ್ಯಕ್ತಿಯಿಂದ ಮತ್ತೊಬ್ಬರಿಗೆ ಹರಡದ ರೋಗಗಳು, ಇಂದು ಸಾರ್ವಜನಿಕ ಆರೋಗ್ಯ ಕ್ಷೇತ್ರದ ಪ್ರಮುಖ ಸವಾಲುಗಳಾಗಿವೆ. ಭಾರತದಲ್ಲಿ, ಸುಮಾರು ಮೂವರಲ್ಲಿ ಒಬ್ಬರಿಗೆ ಅಧಿಕ ರಕ್ತದೊತ್ತಡವಿರುತ್ತದೆ ಮತ್ತು ೮% ರಷ್ಟು ಜನರಿಗೆ ಮಧುಮೇಹ ಇರುತ್ತದೆ ಎಂದು ತಿಳಿದುಬಂದಿದೆ. ದಿನೇದಿನೇ ಹೆಚ್ಚುತ್ತಿರುವ ಈ ಸಮಸ್ಯೆಯನ್ನು ಬಗೆಹರಿಸುವ ಮಾರ್ಗವೆಂದರೆ, ಸರ್ಕಾರದ ಬೆಂಬಲದೊಂದಿಗೆ ಬಲವಾದ ಆರೋಗ್ಯ ಸೇವೆ ವ್ಯವಸ್ಥೆಯನ್ನು ನಿರ್ಮಿಸುವುದು ಮತ್ತು ಅದರ ಮುಖಾಂತರ, ಇಂತಹ ಖಾಯಿಲೆಗಳಿಗೆ ಔಷಧಿಗಳನ್ನು ಎಲ್ಲರಿಗೂ ಸುಲಭವಾಗಿ, ಕಡಿಮೆ ದರದಲ್ಲಿ ಲಭ್ಯವಿರುವಂತೆ ಮಾಡುವುದು.
ಕಳೆದ ವಾರ, ಭಾರತೀಯ ಹವಾಮಾನ ಇಲಾಖೆಯು, ಈ ವರ್ಷದ ಮುಂಗಾರು ಸಾಮಾನ್ಯವಾಗಿರುತ್ತದೆ ಎಂದು ಊಹಿಸಿದೆ. ಆದರೆ ನಾವಿನ್ನೂ ಬೇಸಿಗೆಯ ತಿಂಗಳುಗಳಲ್ಲಿಯೇ ಇದ್ದೇವಲ್ಲವೇ? ನಮ್ಮ ರೈತರು ಬೀಜಗಳನ್ನು ಬಿತ್ತನೆ ಮಾಡಲು ಮತ್ತು ತಮ್ಮ ನೀರಾವರಿ ಸಂಪನ್ಮೂಲಗಳನ್ನು ಸನ್ನದ್ಧವಾಗಿಸಿಕೊಳ್ಳಲು, ನಾಗರಿಕ ಸೇವಾ ಅಧಿಕಾರಿಗಳು ಗೃಹಬಳಕೆ ಮತ್ತು ಕೈಗಾರಿಕಾ ಬಳಕೆಗಾಗಿ ನೀರಿನ ವಿತರಣೆಯನ್ನು ಯೋಜಿಸಲು ಈ ಮಾಹಿತಿ ಬೇಕು, ನಿಜ; ಆದರೆ ಸಮಯಕ್ಕೆ ಮುಂಚಿತವಾಗಿ ಈ ನಿಖರ ಊಹೆಯನ್ನು ಇಲಾಖೆಯ ವಿಜ್ಞಾನಿಗಳು ಹೇಗೆ ಮಾಡಿದರು? ಮುಂಗಾರಿನ ಮೇಲೆ ನಮ್ಮ ದೇಶದ ಹೆಚ್ಚಿನ ಜನರು ಅವಲಂಬಿತರಾಗಿರುವ ಕಾರಣ, ಅದರ ಆಗಮನದ ಊಹೆಯನ್ನು ನಿಖರವಾಗಿ ಮಾಡುವ ಕಲೆಯಲ್ಲಿ ವಿಜ್ಞಾನಿಗಳು ಪರಿಪೂರ್ಣರಾಗುವುದು ಅತ್ಯಾವಶ್ಯಕ.
ಪಶ್ಚಿಮ ಘಟ್ಟ ಶ್ರೇಣಿ ವ್ಯಾಪ್ತಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿದ ಮಾನವ ಚಟುವಟಿಕೆಗಳು ಈ ಹಚ್ಚ ಹಸುರಿನ ಕಾಡುಗಳ ಉಳಿವಿಗೆ ಬೆದರಿಕೆ ಒಡ್ಡುತ್ತಿವೆ. ಇಂತಹ ಬದಲಾವಣೆಗಳನ್ನು ನಿಖರವಾಗಿ ತಿಳಿಯಲು ಸಂಶೋಧಕರು 40 ವರ್ಷಗಳಲ್ಲಿ ಸಸ್ಯವರ್ಗದ ಹೊದಿಕೆಯಲ್ಲಾದ ಬದಲಾವಣೆಗಳನ್ನು ಅಧ್ಯಯನ ಮಾಡಿದ್ದಾರೆ.
ಕಳೆದ ಕೆಲವು ದಶಕಗಳಲ್ಲಿ ಭಾರತದ ವಿಜ್ಞಾನ ಕ್ಷೇತ್ರವು ಅಪಾರ ವೇಗದಿಂದ ಔನತ್ಯದೆಡೆಗೆ ಮುನ್ನಡೆಯುತ್ತಿದ್ದು, ಇದರ ಹಿಂದಿರುವ ಕಾರಣ ಇಲ್ಲಿ ಯಥೇಚ್ಛವಾಗಿ ಲಭ್ಯವಿರುವ ಪ್ರತಿಭೆ ಮತ್ತು ಮೂಲಭೂತ ಸೌಕರ್ಯ. ಖಗೋಳಶಾಸ್ತ್ರದಿಂದ ಮೊದಲ್ಗೊಂಡು ಜೀವಶಾಸ್ತ್ರದವರೆಗೂ, ರಸಾಯನಶಾಸ್ತ್ರದಿಂದ ಕೃಷಿಯವರೆಗೂ ಎಲ್ಲಾ ವೈಜ್ಞಾನಿಕ ಕ್ಷೇತ್ರಗಳನ್ನೂ ಒಳಗೊಂಡಂತೆ ಹೆಮ್ಮೆ ಪಡಬೇಕಾದ ಹಲವಾರು ಸಾಧನೆಗಳು, ಅದರ ಹಿಂದಿನ ವಿಜ್ಞಾನಿಗಳು ಇಲ್ಲಿರುವುದು ಸಂತಸದ ಸತ್ಯ; ಆದರೆ ೨೦೧೭ ಹೇಗೆ ವಿಭಿನ್ನವಾಗಿತ್ತು? ಭಾರತೀಯ ವೈಜ್ಞಾನಿಕ ಸಮುದಾಯದಿಂದ ಕೆಲವು ಪ್ರಮುಖ ಸಂಶೋಧನಾ ಮುಖ್ಯಾಂಶಗಳು ಯಾವುವು?