ಪಕ್ಷಿ ವೀಕ್ಷಣೆ, ಪಕ್ಷಿಗಳನ್ನು ಅವುಗಳ ನೈಸರ್ಗಿಕ ಪರಿಸರದಲ್ಲಿ ಗಮನಿಸುವ ಒಂದು ಕಲೆ. ಪಕ್ಷಿ ವೀಕ್ಷಣೆ, ಕೇವಲ ಪಕ್ಷಿಗಳನ್ನು ನೋಡುವುದಲ್ಲದೇ, ನಮ್ಮ ಆರಾಮ ವಲಯವನ್ನು ಮೀರಿ, ಅವುಗಳ ವೈವಿಧ್ಯಮಯ ಜಗತ್ತನ್ನು, ಅವುಗಳ ವರ್ತನೆಯನ್ನು ತಾಳ್ಮೆಯಿಂದ ಗಮನಿಸುವುದು ಮತ್ತು ಕೆಲ ನಿಯಮಗಳನ್ನು ಪಾಲಿಸುವುದೂ ಒಳಗೊಂಡಿದೆ. ಪಕ್ಷಿ ವೀಕ್ಷಣೆಯಲ್ಲಿ ವಯಸ್ಸು ಅಥವಾ ಅರ್ಹತೆಯ ನಿರ್ಬಂಧನೆಗಳಿಲ್ಲ ಹಾಗಾಗಿ ಎಲ್ಲರೂ ಆನಂದಿಸಬಹುದು. ಕೇವಲ ಅರಣ್ಯಗಳಲ್ಲದೇ, ನಮ್ಮ ಕಿಟಕಿಗಳೂ ಸಹ ಪಕ್ಷಿಗಳ ಜಗತ್ತಿನಲ್ಲಿ ಒಂದು ಇಣುಕು ನೋಟವನ್ನು ನೀಡಬಹುದು. ಸರಿಯಾದ ಮನಃಸ್ಥಿತಿಯೊಂದಿಗೆ ಕೆಲ ನಿಯಮಗಳನ್ನು ಪಾಲಿಸಿದಲ್ಲಿ ಪಕ್ಷಿ ವೀಕ್ಷಣೆ ದಿನನಿತ್ಯವೂ ಆಚರಿಸಬಲ್ಲಂತಹ ಒಂದು ಹಬ್ಬವಾಗಬಹುದು!
Ecology
2014ರಲ್ಲಿ, ಡಾ. ಸಾಹಿಲ್ ನಿಝಾವಾನ್ ನೇತೃತ್ವದ ಸ್ಥಳೀಯ ಇಡು-ಮಿಷ್ಮಿ ಜನಾಂಗದ ಒಂದು ಸಂಶೋಧನಾ ತಂಡ ಮಧ್ಯಮ ಹಾಗೂ ದೊಡ್ಡ ಗಾತ್ರದ ಸಸ್ತನಿಗಳ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ, ಈಶಾನ್ಯ ಭಾರತದ ಅರುಣಾಚಲ ಪ್ರದೇಶದ ದಿಬಾಂಗ್ ಕಣಿವೆಯ ಕಾಡುಗಳಲ್ಲಿ ಕ್ಯಾಮೆರಾಗಳನ್ನು ಇರಿಸಿದ್ದರು. ೨೦ ತಿಂಗಳುಗಳ ನಂತರ, ಕ್ಯಾಮೆರಾಗಳಲ್ಲಿ ಸೆರೆ ಹಿಡಿದಿದ್ದ ವಿಚಿತ್ರ ಹಾಗೂ ಅನಿರೀಕ್ಷಿತ ದೃಶ್ಯಗಳನ್ನು ಕಂಡು ನಿಬ್ಬೆರಗಾದರು. ಒಂದೇ ಪ್ರಭೇದದ ಆರು ಪ್ರತ್ಯೇಕ ಬಣ್ಣ ವಿಧಗಳ, ಮಧ್ಯಮ ಗಾತ್ರದ ಏಷ್ಯಾದ ಕಾಡು ಬೆಕ್ಕುಗಳು ಈ ಕಣಿವೆಯಲ್ಲಿ ಇರುವುದು ಈ ಕ್ಯಾಮೆರಾಗಳ ಮುಖೇನ ತಿಳಿದು ಬಂದಿದೆ.
1960ರಿಂದ, ಜಗತ್ತು ತನ್ನ ಉಷ್ಣವಲಯದ ಸುಮಾರು ಅರ್ಧದಷ್ಟು ಕಾಡುಗಳನ್ನು ತೋಟಗಾರಿಕೆ, ಮರಕಡಿತ, ಕಾಡಿನ ಬೆಂಕಿ ಮತ್ತು ರೋಗಗಳಿಗೆ ಕಳೆದುಕೊಂಡಿದೆ ಎಂದು ನಿಮಗೆ ತಿಳಿದಿದೆಯೇ? ಪ್ರಸ್ತುತ, ವರ್ಷಕ್ಕೆ ಸುಮಾರು 8 ದಶಲಕ್ಷ ಹೆಕ್ಟೇರ್ ಉಷ್ಣವಲಯದ ಕಾಡುಗಳು ಕಳೆದುಹೋಗಿವೆ. ಉಷ್ಣವಲಯದ ಕಾಡುಗಳು ಜಾಗತಿಕ ಜೀವವೈವಿಧ್ಯತೆಯ ನೆಲೆಯಾಗಿರುವುದರಿಂದ, ಇದು ಕೇವಲ ಜೀವವೈವಿಧ್ಯತೆಯ ಮೇಲೆ ಪರಿಣಾಮ ಬೀರುವುದಲ್ಲದೇ, ೧.೬ ಶತಕೋಟಿ ಜನರ ಜೀವನದ ಮೇಲೆಯೂ ಪರಿಣಾಮ ಬೀರುತ್ತದೆ. ಆದರೂ, ಮಾನವ ಪ್ರಾಬಲ್ಯದ ಭೂದೃಶ್ಯಗಳಲ್ಲಿ, ಅವನತಿಗೀಡಾದ ಕಾಡುಗಳ ಪುನಶ್ಚೇತನ, ಇದುವರೆಗೆ ಸಂಭವಿಸಿರುವ ನಷ್ಟಗಳನ್ನು ಹಿಮ್ಮೆಟ್ಟಿಸಲು ಮತ್ತು ಈ ಕಾಡುಗಳ ಚೇತರಿಕೆಗೆ ಸಹಾಯ ಮಾಡುತ್ತದೆ.
‘ಸಗಣಿ’ ಜೀರುಂಡೆಗಳು ಆಕರ್ಷಕ ಜೀವಿಗಳು. ಇವು ಪ್ರಾಣಿಗಳ ಸಗಣಿಗಳನ್ನು ಆಹಾರವಾಗಿ ಸೇವಿಸುತ್ತವೆ ಮತ್ತು ಅದರಿಂದ ಅವುಗಳ ಎಲ್ಲಾ ಪೋಷಕಾಂಶಗಳನ್ನು ಪಡೆಯುತ್ತವೆ. ಈ ಸಣ್ಣ ಜೀರುಂಡೆಗಳು, ಸಗಣಿಯನ್ನು ತಿನ್ನುವ ಮೂಲಕ ಮಣ್ಣಿನ ರಚನೆ ಮತ್ತು ಮಣ್ಣಿನ ಫಲವತ್ತತೆಯನ್ನು ಸುಧಾರಿಸುತ್ತವೆ. ಹಾಗಾಗಿ, ಇವು ಕೃಷಿಯಲ್ಲಿ ಅತ್ಯಗತ್ಯ ಪಾತ್ರವನ್ನು ವಹಿಸುತ್ತವೆ. ಪ್ರಾಣಿಗಳ ಸಗಣಿಯಲ್ಲಿ ಇರುವ ಬೀಜಗಳನ್ನು ಹರಡಲು, ಬೀಜಗಳನ್ನು ಮಣ್ಣಲ್ಲಿ ಸೇರಿಸುವ ಮೂಲಕ, ಉಷ್ಣವಲಯಪ್ರದೇಶಗಳಲ್ಲಿ ಗಿಡಮರಗಳು ಬೆಳೆಯಲು ಸಹಾಯ ಮಾಡುತ್ತವೆ. ಇವು ಸರ್ವಭಕ್ಷಕಗಳಿಗಿಂತ ಸಸ್ಯಹಾರಿಗಳ ಸಗಣಿಗಳಿಗೆ ಆದ್ಯತೆ ನೀಡುತ್ತವೆ.
ಗೆದ್ದಲುಗಳು ತಮ್ಮ ಸಾಮಾಜಿಕ ಸಂಘಟನೆ, ವಾಸ್ತುಶಿಲ್ಪ ವಿನ್ಯಾಸ ಸಾಮರ್ಥ್ಯಗಳಿಗೆ ಮತ್ತು ಕುಖ್ಯಾತವಾಗಿ ಕೀಟಗಳಾಗಿ ಹೆಸರುವಾಸಿ. ಆದಾಗ್ಯೂ, ಈ ವರೆಗೆ ವರ್ಣಿಸಲಾದ ಎಲ್ಲ ಪ್ರಭೇದಗಳು ಹಾನಿ ಉಂಟು ಮಾಡುವ ವರ್ಗಕ್ಕೆ ಸೇರುವುದಿಲ್ಲ. ಒಂದು ಕಡೆ ವಿಶ್ವದ ಗೆದ್ದಲು ಪ್ರಭೇದಗಳಲ್ಲಿ ಕೇವಲ 12.5% ರಷ್ಟು ಮಾತ್ರ ಅಪಾರ ಆರ್ಥಿಕ ಹಾನಿಯನ್ನುಂಟುಮಾಡುವ ಕೀಟಗಳಾದರೆ, ಮತ್ತೊಂದೆಡೆ ಇವುಗಳ ಮಣ್ಣಿನಲ್ಲಿ ವಾಸಿಸುವ ಪ್ರತಿರೂಪಗಳು, ನೈಸರ್ಗಿಕ ಜಗತ್ತಿನಲ್ಲಿ ಅತ್ಯಗತ್ಯ ಪಾತ್ರವನ್ನು ವಹಿಸುತ್ತವೆ. ಇವು ಕಠಿಣ ಸಸ್ಯನಾರುಗಳನ್ನು ಕೊಳೆಸಲು ಅಥವಾ ಭಾಗಗಳಾಗಿ ವಿಭಜಿಸಲು ಸಹಾಯ ಮಾಡುತ್ತವೆ ಮತ್ತು ಪೋಷಕಾಂಶಗಳನ್ನು ಮಣ್ಣಿನಲ್ಲಿ ಮರುಬಳಕೆ ಮಾಡುತ್ತವೆ.
ನಗರಗಳಲ್ಲಿ ಬದುಕುಳಿಯಲು, ನಗರವಾಸಿ ಹಲ್ಲಿಗಳು ತಮ್ಮ ಹಳ್ಳಿವಾಸಿ ಸಹೋದರರಿಗಿಂತ ಹೆಚ್ಚು ಬುದ್ಧಿವಂತಿಕೆ ಪ್ರದರ್ಶಿಸುವತ್ತ ಸಫಲವಾಗಿವೆ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಒಂದು ಸಂಶೋಧನಾ ತಂಡದ ಸಂಶೋಧನಾ ಫಲಿತಾಂಶವು ಸೂಚಿಸುತ್ತದೆ.
ಈ ವರ್ಷದ ಬೇಸಿಗೆ ಕಾಲ, ಮಳೆಗಾಲದ ಅವಧಿಯಲ್ಲಿ ಭಾರತದ ಅನೇಕ ಪ್ರದೇಶಗಳು ಬರಗಾಲ ಮತ್ತು ಪ್ರವಾಹಗಳಿಂದ ತತ್ತರಿಸಿದವು. ನೀರಾವರಿಗಾಗಿ ಮಳೆಯ ಮೇಲೆ ಅವಲಂಬಿತವಾಗಿರುವ ದೇಶದಲ್ಲಿ (ವ್ಯತಿರಿಕ್ತ) ವಿನಾಶಕಾರಿ ಹವಾಮಾನದಿಂದಾಗಿ ಉಂಟಾಗುವ ಬೆಳೆಗಳ ನಷ್ಟವು ರೈತರಿಗೆ ತೊಂದರೆ ಉಂಟು ಮಾಡಿದೆ. ದೇಶದಲ್ಲಿ ವ್ಯವಸಾಯ ಯೋಗ್ಯ ಭೂಮಿಯ ಅರ್ಧದಷ್ಟು ಭಾಗ ಮಳೆಯ ಮೇಲೆ ಆಶ್ರಯಿಸಿರುವುದರಿಂದ, ಬೆಳೆಗಳು ಹವಾಮಾನದ ವೈಪರೀತ್ಯಗಳನ್ನು (ಅಸ್ಥಿರತೆಗಳನ್ನು) ಸಹಿಸಿಕೊಳ್ಳುವ ವಿಧಾನಗಳು ಅಗತ್ಯವಾಗಿದೆ.
ಪರ್ವತಾರೋಹಿಗಳ ಅಚ್ಚುಮೆಚ್ಚಿನ ಹಿಮಾಲಯದ ಹೂವುಗಳು, ಉತ್ಸಾಹಿ ಪರ್ವತಾರೋಹಿಗಳಿಂದ ಭಾರ ಹೊರುವ ಬಗ್ಗೆ ಪಾಠ ಕಲಿತಿರಬಹುದು! ಪರ್ವತಾರೋಹಿಗಳು ಎತ್ತರಕ್ಕೆ ಹೋದಾಗ, ಅಗತ್ಯವಾದ ವಸ್ತುಗಳನ್ನು ಮಾತ್ರ ಒಯ್ಯುತ್ತಾರೆ, ಮತ್ತು ಅಗತ್ಯವಿಲ್ಲದ, ಹೆಚ್ಚುವರಿ ಸಾಮಾನುಗಳನ್ನು ತೆಗೆದುಕೊಂಡು ಹೋಗುವುದಿಲ್ಲ. ಅಂತೆಯೇ, ಇಲ್ಲಿರುವ ಹೂವುಗಳು, ಪ್ರದೇಶ ಎತ್ತರವಾದಷ್ಟು, ಅವುಗಳು ಗಾತ್ರದಲ್ಲಿ ಚಿಕ್ಕದಾಗುತ್ತವೆ, ಮತ್ತು ಅವುಗಳ ಸಣ್ಣ ಪರಾಗಸ್ಪರ್ಶಕಗಳಿಗೆ ತಕ್ಕಂತೆ ಕಡಿಮೆ ಮತ್ತು ಕೇಂದ್ರೀಕೃತವಾದ ಮಕರಂದವನ್ನು ಹಿಡಿದಿಟ್ಟುಕೊಳ್ಳುತ್ತವೆ. ಒಂದು ಬಗೆಯ ಹೂಬಿಡುವ, ಮರದಂತೆ ಇರುವ ಗಿಡಗಳಾದ ರೋಡೋಡೆಂಡ್ರಾನ್ ಗಳ ಕುರಿತು ಇತ್ತೀಚಿನ ಒಂದು ಅಧ್ಯಯನವು ಇದರ ಮೇಲೆ ಬೆಳಕು ಚೆಲ್ಲುತ್ತದೆ.
ಸುಮಾರು ಮೂರು ದಶಕಗಳ ಹಿಂದೆ, ಜರ್ಮನಿಯ ಜೇನುನೊಣ ತಜ್ಞ ಕ್ಲಾಸ್ ವಾರ್ನ್ಕೆ ಅವರು ಭಾರತದ ಲಡಾಖ್ ನ ಸುಂದರವಾದ ಭೂದೃಶ್ಯದಿಂದ ಹೊಸ ಜಾತಿಯ ಕೋಗಿಲೆ-ಜೇನುನೊಣವನ್ನು ಪತ್ತೆ ಮಾಡಿ, ವರದಿ ಮಾಡಿದ್ದರು. ಅವರು ಎಪಿಯೋಲಸ್ ಕುಲಕ್ಕೆ ಸೇರಿದ ಈ ಸಣ್ಣ ಜೇನುನೊಣದ ರೂಪವಿಜ್ಞಾನವನ್ನು ಅಧ್ಯಯನ ಮಾಡಿ, ಅದಕ್ಕೆ ಲಡಾಖ್ ಅನುಗುಣವಾಗಿ, ಎಪಿಯೋಲಸ್ ಲಡಾಖೆನ್ಸಿಸ್ ಎಂದು ನಾಮಕರಣ ಮಾಡಿದರು. ದುರದೃಷ್ಟವಶಾತ್, 1993 ರಲ್ಲಿ ಅವರ ನಿಧನದ ನಂತರ, ಈ ಪ್ರಭೇದದ ಬಗೆಗಿನ ವಿವರಣೆಗಳು ಪ್ರಕಟವಾಗಲಿಲ್ಲ.